damnlyrics.com

Enu Sadhana Maadi

ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ

ಸುಖಪೊಂದಲು ಪ

ಸಾನು ರಾಗದಿ ಶ್ರವಣ, ಮನನ ಧ್ಯಾನಗೈದಿತೋ

ಬಹು ಜನ್ಮದಿ ಅ.ಪ

ದೇವದಾರು, ಅಗರು, ಚಂದನ, ಮಾವು, ಚಂಪಕ,

ಹರಿ ತೋಷಕ

ಸಾವಿರಾರು ತರುಲತೆಗಳೀ ವಸುಧಿಯೊಳಿರಲೂ

ಬಿದಿರಿನಕೊಳಲು 1

ಮುರಮಡÀನನ ಅಭಯ ಕರದವರ

ಪ್ರಸಾದವ ಕಮಲೋಧ್ಬವ

ಸ್ಮರರಿಪು ಮುಖಸುರರು ಬೇಡಲು ದೊರೆಯದೀ

ವಿಭವ ವಂಶೋದ್ಬವ 2

ತ್ರಾಣವೇನು ಮುರಲಿಗೆ ಶ್ರೀ ಹರಿಯ ವದನದೊಳು

ಸುಧೆ ಸವಿಯಲು

ಶ್ರೀನರಸಿಂಹನರಾಣಿ ತಾನೆ ವೇಣುರಂಧ್ರದೊಳು

ನಿಂದಿರುವಳು 3

Enjoy the lyrics !!!